ಡಾ|| ರಾಜ್

ರಾಜ ಮುತ್ತು ರಾಜ
ಕನ್ನಡದ ನೀ ಮುದ್ದು ರಾಜ || ಪ ||

ರಂಗಭೂಮಿಯ ಕೃಷಿ ಅಂಗಳದಲಿ
ನಟನೆಯ ಕಲೆಯ ಬೀಜ ನೀವಾಗಿ
ಸಸಿಯಾಗಿ ಮೊಳಕೆಯೊಡೆದು ಸಿನಿಮಾದಲ್ಲಿ
ಹೆಮ್ಮರವಾಗಿ ಬೆಳೆದು ನೆರಳಾದೆ ಕಲೆಗೆ

ಗಾನ ಕೋಗಿಲೆಗಳ ಗಾನಸಿರಿಯಾಗಿ
ಗಂಧರ್ವ ಲೋಕವ ನೀ ಸೃಷ್ಟಿಸಿದೆ
ಯೋಗಿಯಾಗಿ ತ್ಯಾಗಿಯಾಗಿ
ಕಲೆಯಲೇ ನೀ ಜೀವತೇಯ್ದು
ಕನ್ನಡದ ಮೇರು ನಟನಾಗಿ ನಿಂತಿಹೆ

ಕನ್ನಡದ ಹೆಮ್ಮೆಯ ಪುತ್ರನಾಗಿ
ಕನ್ನಡ ರಥವ ನೀನೇರಿ ನಡೆದೆ
ಅಭಿಮಾನಿಗಳು ನಿನ್ನ ದೇವರೆಂದರೂ
ಅಭಿಮಾನಿಗಳೇ ನಿನ್ನ ದೇವರೆಂದು ತೋರಿ
ಸರಳತೆಯ ಸಾಕಾರ ಮೂರ್ತಿ ನೀನಾದೆ

ಅದೆಷ್ಟೋ ಪ್ರಶಸ್ತಿ ಪುರಸ್ಕಾರಗಳು
ನಿನ್ನೊಡಲಿಗೆ ಬಂದು ಸೇರಿದರೂ
ಅಹಂಕಾರವೂ ನಿನ್ನಲ್ಲಿ ಸುಳಿಯಲಿಲ್ಲ
ಸರಳತೆ ನಿನ್ನ ಜೀವನ ಗಾಯನ
ಆಯಿತು ಇತರರಿಗೂ ಮಾರ್ಗದರ್ಶನ

ನೀನೆಂದಿಗೂ ನಮ್ಮೆಲ್ಲರ ಸ್ಫೂರ್ತಿಯಾಗಿರುವೆ
ಮಣ್ಣಲ್ಲಿ ಮಣ್ಣಾಗಿ ಹೋದರೂ
ಕನ್ನಡ ಮಣ್ಣಲಿ ಚಿರ ಚೇತನವಾಗಿರುವೆ
ನೀ ರಾಜಕುಮಾರ ಎಂದೆಂದಿಗೂ
ಕುಮಾರನೇ ಕನ್ನಡಮ್ಮನ ಕುವರನೇ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಲಾಕೃತಿಯೊಂದು
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೮

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

cheap jordans|wholesale air max|wholesale jordans|wholesale jewelry|wholesale jerseys